ಧನಬಾದ್ (ಜಾರ್ಖಂಡ್): ‘ರಿಕ್ಷಾ ಗಾಡಿ ಎಳೆಯುವ ನನ್ನ ಪತಿ ಹಸಿವಿನಿಂದ ಮೃತಪಟ್ಟಿದ್ದಾರೆ’ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಜಿಲ್ಲಾಡಳಿತ ತಳ್ಳಿ ಹಾಕಿದ್ದು, ಝಾರಿಯಾ ನಗರದ ತಾರಾಬಗಾನ್ ಗ್ರಾಮದಲ್ಲಿ ರಿಕ್ಷಾ ಗಾಡಿ ಎಳೆಯುವ ವ್ಯಕ್ತಿ ಅನಾರೋಗ್ಯದಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಿದೆ.