ಉಪ್ಪಿನಂಗಡಿ: ಗುಂಡ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಕೆಂಜಾಳ ಎಂಬಲ್ಲಿ ಭಾನುವಾರ ಕಾರು ಮರಕ್ಕೆ ಡಿಕ್ಕಿ ಹೊಡೆದುದರಿಂದ ಬೆಂಗಳೂರಿನ ವಿಘ್ನೇಶ್ವರ ನಗರ ನಿವಾಸಿ ವೆಂಕಟೇಶ್ (33) ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ಮಾಲಿಂಗ, ರಮೇಶ್, ಸತೀಶ್, ಚಿಕ್ಕಣ್ಣ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.