ತುಮಕೂರಿನ ರಾಮಕೃಷ್ಣ–ವಿವೇಕಾನಂದ ಆಶ್ರಮದ ವೀರೇಶಾನಂದ ಸ್ವಾಮೀಜಿ, ‘ಮನಶಾಂತಿ ನೀಡುವ ಶಾಸ್ತ್ರೀಯ, ಗ್ರೆಗೋರಿಯನ್ ಸಂಗೀತಕ್ಕಿಂತ ಇಂದ್ರಿಯ ಪ್ರಚೋದನೆ ಮಾಡುವ ಪಾಶ್ಚಾತ್ಯ ಸಂಗೀತ ಪ್ರಕಾರಕ್ಕೆ ಜನರು ಆಕರ್ಷಿತರಾಗುತ್ತಿದ್ದಾರೆ. ಸಂಗೀತಕ್ಕೆ ಇದ್ದ ಆಧ್ಯಾತ್ಮಿಕ, ಧಾರ್ಮಿಕ ಪರಿಧಿ ಕಳಚಿ, ಇಂದು ವಾಣಿಜ್ಯೀಕರಣದ ರೂಪ ತಳೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.