ಭಾಷೆ ಬೆಳೆವ ವೇಗ ಸಾಲದು
ಬೆಂಗಳೂರು, ಅ. 31– ‘ನನ್ನದೂ ಅದೇ ಅಭಿಪ್ರಾಯ’ ಮುಖ್ಯಮಂತ್ರಿ ನಿಜಲಿಂಗಪ್ಪ ಅವರು ಹೇಳಿ ಸುಮ್ಮನಾದರು. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ‘ಪ್ರಜಾವಾಣಿ’ಗಿತ್ತ ವಿಶೇಷ ಸಂದರ್ಶನದಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಸಾಕಷ್ಟು ವೇಗದಲ್ಲಿ ಆಗುತ್ತಿಲ್ಲ ಎಂಬ ಆಕ್ಷೇಪಣೆ ಸಾರ್ವಜನಿಕರಲ್ಲಿದೆ. ಮುಖ್ಯಮಂತ್ರಿಗಳಾದ ತಾವು ಏನು ಹೇಳುವಿರಿ? ಎಂದು ಕೇಳಿದಾಗ ವಿಷಯದ ಪ್ರಸ್ತಾಪವನ್ನು ಅಲ್ಲಿಗೇ ಮುಗಿಸಿಬಿಟ್ಟು, ಉತ್ತರ ನೀಡಿದರು.