ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವ್ರಂಥ ಮನುಷ್ಯ: ಆದರೆ ಸಂಜೆ ನಂತರ ಸಿಗಬಾರದು!

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬಿಗ್‌ ಬಾಸ್‌ ಮೂಲಕ ಮನೆಮಾತಾದ ಪ್ರಥಮ್‌ ಅಭಿನಯದ ಚಿತ್ರ ಬಹುತೇಕ ಸಿದ್ಧವಾಗಿದೆ. ಇದರ ಹೆಸರು ‘ದೇವ್ರಂಥ ಮನುಷ್ಯ’. ಈ ಸಿನಿಮಾ ನವೆಂಬರ್‌ನಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.

ಸಿನಿಮಾದ ಆಡಿಯೊ ಲಾಂಚ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಈಚೆಗೆ ನಡೆಯಿತು. ‘ಯಶ್, ಸುದೀಪ್ ಅವರು ಅಭಿನಯಿಸುವ ಸಿನಿಮಾಗಳ ಹಾಡುಗಳು ಇಂಪಾಗಿ ಇರುವಂತೆಯೇ, ನಾನು ಅಭಿನಯಿಸಿರುವ ಈ ಸಿನಿಮಾ ಹಾಡುಗಳು ಕೂಡ ಇಂಪಾಗಿವೆ’ ಎಂದು ಖುಷಿ ಹಂಚಿಕೊಂಡರು ಪ್ರಥಮ್.

‘ಇದು ನಿರ್ದೇಶಕರ ಸಿನಿಮಾ. ಅವರ ಆಲೋಚನೆಗಳಿಗೆ ಜೀವ ತುಂಬುವ ಕೆಲಸವನ್ನಷ್ಟೇ ನಾನು ಮಾಡಿದ್ದೇನೆ’ ಎಂದು ಅವರು ಹೇಳಿದರು. ಬಿಗ್‌ ಬಾಸ್‌ನಲ್ಲಿ ಪಾಲ್ಗೊಂಡಿದ್ದ ಕಿರಿಕ್‌ ಕೀರ್ತಿ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ನನ್ನದು ಈ ಸಿನಿಮಾದಲ್ಲಿ ತೀರಾ ಮುಗ್ಧ ಹುಡುಗಿಯ ಪಾತ್ರ. ಪ್ರಥಮ್‌ ಹೇಳಿದ್ದನ್ನೆಲ್ಲಾ ಕೇಳುವ ಪಾತ್ರ ನನ್ನದು’ ಎಂದರು ನಾಯಕಿ ಶ್ರುತಿ. ವೈಷ್ಣವಿ ಅವರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಇನ್ನೊಬ್ಬಳು ನಾಯಕಿ.

ಪ್ರದ್ಯೋತನ್ ಅವರು ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ಕಿರಣ್ ಶೆಟ್ಟಿ ಅವರು ಈ ಸಿನಿಮಾದ ನಿರ್ದೇಶಕರು. ಇದು ಅವರ ನಿರ್ದೇಶನದ ಮೊದಲ ಚಿತ್ರವೂ ಹೌದು. ‘ಮುಂದಿನ ತಿಂಗಳು ಸಿನಿಮಾ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದೇವೆ’ ಎಂದು ಕಿರಣ್‌ ಹೇಳಿದರು. 

‘ದೇವ್ರಂಥ ಮನುಷ್ಯ’ ಸಿನಿಮಾಕ್ಕೆ ‘ಸಂಜೆ ಮೇಲೆ ಸಿಗ್ಬೇಡಿ’ ಎನ್ನುವ ಅಡಿ ಶೀರ್ಷಿಕೆ ನೀಡಿದ್ದಾರೆ. ‘ದೇವ್ರಂಥ ಮನುಷ್ಯನನ್ನು ಸಂಜೆ ಮೇಲೆ ಏಕೆ ಭೇಟಿ ಮಾಡಬಾರದು’ ಎಂದು ಪ್ರಶ್ನಿಸಿದಾಗ, ‘ಸಿನಿಮಾ ವೀಕ್ಷಿಸಿ, ಈ ಪ್ರಶ್ನೆಗೆ ಉತ್ತರ ಪಡೆಯಿರಿ’ ಎಂದರು ಕಿರಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT