ಮಹಾಜನ್ ಶಿಫಾರಸು ಮಾರ್ಪಡಿಸುವ ಯತ್ನಕ್ಕೆ ರಾಜ್ಯದ ವಿರೋಧ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ನ. 2– ಮಹಾಜನ್ ಆಯೋಗದ ತೀರ್ಪನ್ನು ಮಾರ್ಪಡಿಸುವ ಕೇಂದ್ರ ಸರ್ಕಾರದ ಯಾವುದೇ ಪ್ರಯತ್ನವನ್ನು ತಮ್ಮ ಸರ್ಕಾರವು ತೀವ್ರವಾಗಿ ವಿರೋಧಿಸುವುದೆಂದು ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ಸ್ಪಷ್ಟವಾಗಿ ತಿಳಿಸಿದರು.