ಮಹಾಜನ್ ಶಿಫಾರಸನ್ನು ಕಾರ್ಯಗತ ಮಾಡದಿದ್ದರೆ ಅಂತರ್ಯುದ್ಧದ ಅಪಾಯ
ನಾಗಪುರ, ನ. 5– ಮಹಾರಾಷ್ಟ್ರ– ಮೈಸೂರು ಗಡಿ ವಿವಾದವನ್ನು ಕುರಿತ ಮಹಾಜನ್ ಆಯೋಗದ ವರದಿಯನ್ನು ಕಾರ್ಯಗತ ಮಾಡಲು ದೃಢವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ನಾಗಸೇನಾ ಮುಖ್ಯರೂ, ನಾಗಪುರ ನಗರ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿಯೂ ಆದ ಶ್ರೀ ಅಪ್ಪಾಜಿ ಪುಣಜೆ ಅವರು ನಿನ್ನೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದರು. ಹಾಗೆ ಮಾಡದಿದ್ದರೆ, ಪ್ರಜಾಪ್ರಭುತ್ವಕ್ಕೆ ವಿನಾಶಕಾರಿ ಪೆಟ್ಟು ಕೊಟ್ಟಂತಾಗುವುದಲ್ಲದೆ, ದೇಶದಲ್ಲಿ ಅಂತರ್ಯುದ್ಧವೂ ನಡೆಯಬಹುದು ಎಂದು ಇಂದು ಇಲ್ಲಿ ಪ್ರಕಟವಾದ ಹೇಳಿಕೆಯೊಂದರಲ್ಲಿ ಅವರು ತಿಳಿಸಿದ್ದಾರೆ.