ಈ ರಸ್ತೆ ಸಮೀಪದಲ್ಲಿಯೇ ಅನೇಕ ಶಾಲಾ–ಕಾಲೇಜುಗಳಿದ್ದು, ಬೃಹತ್ ಪ್ರಮಾಣದ ವಾಹನಗಳು ಸಂಚರಿಸಿದಾಗ ದೂಳು ಕೋಣೆಯನ್ನು ಪ್ರವೇಶಿಸುತ್ತದೆ. ಇದರಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ಪ್ರಭಾಕರ ಮೊಳೆದ, ಕುಮಾರ ಕದಂ, ರಾಜು ಬಾಣಕಾರ ಬೇಸರ ವ್ಯಕ್ತಪಡಿಸಿದರು.