‘ಖಾಸಗಿ ಶಾಲೆಗಳ ಬಹುತೇಕ ವಾಹನಗಳು ದುಸ್ಥಿತಿಯಲ್ಲಿರುತ್ತವೆ. ಸುರಕ್ಷತಾ ನಿಯಮಗಳು, ವಾಹನ ಕಾಯ್ದೆ ನಿಯಮ ಗಾಳಿಗೆ ತೂರಿ ವಾಹನ ಓಡಿಸುತ್ತಾರೆ. ಇಂತಹ ಸುರಕ್ಷತೆ ಇಲ್ಲದ ವಾಹನಗಳಲ್ಲಿ ಮಕ್ಕಳ ರಕ್ಷಣೆಗೆ ಅಪಾಯವಿದೆ. ಅನಾಹುತ ಸಂಭವಿಸುವ ಮೊದಲೇ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ನಗರ ಠಾಣೆಯ ಇನ್ಸ್ಪೆಕ್ಟರ್ ಹನುಮಂತಪ್ಪ ದೂರು ಸ್ವೀಕರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.