ಶನಿವಾರಸಂತೆ: ಸರಳ ವಿವಾಹ ಸುಂದರ ವೈವಾಹಿಕ ಜೀವನಕ್ಕೆ ನಾಂದಿ. ಸರಳತೆಯಿಂದ ಬದುಕಿದಲ್ಲಿ ನೆಮ್ಮದಿ ಮೂಡಲಿದೆ ಎಂದು ಮಾಜಿ ಸಚಿವ ಬಿ.ಎ. ಜೀವಿಜಯ ಅಭಿಪ್ರಾಯಪಟ್ಟರು. ಸಮೀಪದ ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ಜೈಭೀಮ್ ಸಿದ್ಧಾರ್ಥ ಹೋಬಳಿ ಘಟಕದಿಂದ ಭಾನುವಾರ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾರಾವ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಹೇಮರಾಜ್, ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾಸುಂದರ್, ಪ್ರಮುಖರಾದ ಡಿ.ಸಿ.ನಿರ್ವಾಣಪ್ಪ, ಎಸ್.ಎಸ್.ಶಿವಶಂಕರ್, ಟಿ.ಈ.ಸುರೇಶ್ ಮಾತನಾಡಿದರು.