ಯಾದಗಿರಿ: ‘ವೀರಶೈವರ ಹುಟ್ಟಿನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವ ಬಸವಮೃತ್ಯುಂಜಯ ಸ್ವಾಮೀಜಿ ತಕ್ಷಣ ರಾಜ್ಯದ ಜನರ ಮುಂದೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು’ ಎಂದು ಕೋಡಾಲದ ಗಡ್ಡೆಬಸವೇಶ್ವರ ಸಂಸ್ಥಾನ ಮಠದ ಪಂಚಮ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.
‘ಧರ್ಮ ರಕ್ಷಿಸುವ ವ್ಯಕ್ತಿಗಳಿಂದ ಜನರು ತತ್ವೋಪದೇಶ ಬಯಸುತ್ತಾರೆ. ಧರ್ಮ ರಕ್ಷಿಸುವವರು ಇಷ್ಟೊಂದು ನೀಚಸ್ಥಿತಿಗೆ ಇಳಿಯಬಾರದು. ಬಸವಮೃತ್ಯುಂಜಯ ಶ್ರೀಗೆ ಕೂಡಲೇ ಬುದ್ಧಿ ಹೇಳುವವರು ಬೇಕಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.