‘ಅಸತ್ಯವನ್ನೇ ಹಲವಾರು ಬಾರಿ ಹೇಳಿ ಸತ್ಯ ಮಾಡಬಹುದು ಎಂಬ ಭ್ರಮೆ ಕೆಲವರಿಗೆ ಇದೆ. ಸಚಿವ ಎಂ.ಬಿ.ಪಾಟೀಲ ಅವರು ರೇಣುಕಾಚಾರ್ಯರು ಕಲ್ಲಿನಲ್ಲಿ ಹುಟ್ಟಿದ್ದಾರೆ ಎಂದು ತಪ್ಪಾಗಿ ಹೇಳಿದ್ದಾರೆ. ಆದರೆ, ಸೋಮೇಶ್ವರ ಶಿವಲಿಂಗದಿಂದ ಅವತರಿಸಿದರೇ ಹೊರತು ಕಲ್ಲಿನಿಂದಲ್ಲ. ವೀರಶೈವರೇ ಆಗಲಿ, ಲಿಂಗಾಯತರೇ ಆಗಲಿ ಪೂಜಿಸುವ ಲಿಂಗ ಶಿಲೆಯಿಂದಲೇ ನಿರ್ಮಾಣಗೊಂಡಿದೆ’ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.