ಧಾರವಾಡ: ವೈಶುದೀಪ ಪ್ರತಿಷ್ಠಾನದ ವತಿಯಿಂದ ಧಾರವಾಡ ವಿಧಾನಸಭಾ ಕ್ಷೇತ್ರದ ಐದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ಒಂದು ಆಯಂಬುಲೆನ್ಸ್ಗಳನ್ನು ವಿತರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ಎಂ.ದೊಡ್ಡಮನಿ ಅವರಿಗೆ ವಾಹನಗಳ ಕೀ ಅನ್ನು ಸಚಿವ ಕುಲಕರ್ಣಿ ಹಸ್ತಾಂತರಿಸಿದರು. ಉಪ್ಪಿನಬೆಟಗೇರಿ, ಗರಗ, ಕೋಟೂರು, ಅಮ್ಮಿನಭಾವಿ, ಹೆಬ್ಬಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ವಾಹನಗಳನ್ನು ನೀಡಲಾಯಿತು.