ಸಕಲೇಶಪುರ: ತಾಲ್ಲೂಕಿನ ಹಾನುಬಾಳು ಹೋಬಳಿಯ ಅಗನಿ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಕಾಡಾನೆಗಳು ನುಗ್ಗಿ ದಾಂದಲೆ ನಡೆಸಿದ್ದು, ಬೆಳೆಹಾನಿಯಾಗಿದೆ. ವೆಂಕಟೇಶ್ ಹಾಗೂ ಶಿವು ಅವರ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಆನೆಗಳು 200ಕ್ಕೂ ಹೆಚ್ಚು, ಉತ್ತಮ ಫಸಲು ನೀಡುತ್ತಿದ್ದ ಕಾಫಿ ಗಿಡಗಳನ್ನು ನಾಶಪಡಿಸಿವೆ. ಮರಗಳನ್ನು ಉರುಳಿಸಿದ್ದು, ಕಾಳು ಮೆಣಸು ಬಳ್ಳಿಗಳೂ ನಾಶಗೊಂಡಿವೆ.