ಆದರೆ, ಸಹಸ್ರಾರು ವಾಹನಗಳು ನಿರಂತರವಾಗಿ ಸಂಚರಿಸುತ್ತಿರುವುದರಿಂದ ರಸ್ತೆ ಹದಗೆಟ್ಟು ಸಾಕಷ್ಟು ದೂಳು ಏಳುತ್ತಿದೆ. ಇತ್ತೀಚೆಗಷ್ಟೇ ಪೈಪ್ಗಳನ್ನು ಅಳವಡಿಸುವ ಸಲುವಾಗಿ ಬಿಆರ್ಟಿಎಸ್ ಕಾಮಗಾರಿ ಗುತ್ತಿಗೆ ಹಿಡಿದಿರುವ ಕಂಪೆನಿ ಹೊಸ ರಸ್ತೆಯನ್ನೇ ಅಗೆದು ಸಾರ್ವಜನಿಕರ ಟೀಕೆಗೆ ತುತ್ತಾಗಿತ್ತು. ಮತ್ತೀಗ ರಾತ್ರೋ ರಾತ್ರಿ ರಸ್ತೆ ಅಗೆದು ಕಾಟಾಚಾರಕ್ಕೆ ಮುಚ್ಚಿದ್ದರಿಂದ ಪ್ರಯಾಣಿಕರ ಮುಖಕ್ಕೆ ದೂಳು ಅಡರುತ್ತಿದೆ.