ಕಿಡಿಗೇಡಿಗಳು ಪುನಃ ಇಂತಹ ಕೃತ್ಯದಲ್ಲಿ ತೊಡಗದಂತೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ತಹಶೀಲ್ದಾರ್ ಅಮರೇಶ ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಮಾಜಿ ಶಾಸಕ ಗಂಗಾಧರ ನಾಯಕ, ಮುಖಂಡರಾದ ಎಂ.ಈರಣ್ಣ, ಉಮೇಶ ಸಜ್ಜನ್, ವಸಂತ ಕೊಡ್ಲಿ, ಬಸವಗೌಡ ಚೀಕಲಪರ್ವಿ, ಜಗನ್ನಾಥ ಕುಲಕರ್ಣಿ, ಅಯ್ಯಪ್ಪ ನಾಯಕ ಮ್ಯಾಕಲ್, ಸುರೇಶ ನಾಡಗಡ, ಗಿರಿಮಲ್ಲಯ್ಯ, ಶರಣ್ ಪಾಟೀಲ್,ಗಿರಿ ನಾಯಕ ಪೆರಕಲ್, ಗಂಗಾರಾಮ, ಪ್ರಸಾದ ಕೆಇಬಿ, ಶರಣಯ್ಯ ಸ್ವಾಮಿ, ವೀರೇಶ ಕರೇಗುಡ್ಡ, ಮೃತ್ಯುಂಜಯ ಶೆಟ್ಟಿ, ನಾಗರಾಜ ಕಬ್ಬೇರ್, ಗೋಪಾಲ ನಾಯಕ, ವಿ.ಜನರ್ಧನ್, ನರಸಪ್ಪ ಜೂಕೂರು, ಸಿದ್ದು ಸಾಹುಕಾರ ಮುಂತಾದವರು ಇದ್ದರು.