‘ಕಮ್ಯುನಿಸ್ಟರಿಗೆ ಧರ್ಮದ ಪರಿಕಲ್ಪನೆ ಇಲ್ಲ ಎಂದು ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಿದ್ದೀರಿ. ಆದರೆ, ಕಮ್ಯುನಿಸ್ಟರು ನಿಮ್ಮಂತೆ ಜಾತಿಯ ವಿಷಬೀಜ ಬಿತ್ತಿ ಹೊಡೆದಾಡಿಸುವ ನೀತಿ ಪಾಲಿಸುವವರಲ್ಲ ಎಂಬುದನ್ನು ನೆನಪಿನಲ್ಲಿ ಇಡಿ. ಹಾಗೆಯೇ ಎಡಚರ ಸಾಹಿತ್ಯ ಎಂದು ಟೀಕಿಸುವ ಮುನ್ನ ದೇಶದ ಅರ್ಥಗರ್ಭಿತ ಸಾಹಿತ್ಯ ಎಡಪಂಥೀಯರದ್ದು ಎಂದು ತಿಳಿಯಿರಿ’ ಎಂದು ಗೋಪಾಲ ಶೆಟ್ಟಿ ಹೇಳಿದ್ದಾರೆ.