ಬುಧವಾರ ಭದ್ರತೆಯಲ್ಲಿ ತುಸು ಸಡಿಲಗೊಂಡಂತೆ ಕಂಡಿತು. ಗುರುವಾರ ನಗರದಾದ್ಯಂತ ಖಾಕಿ ಪಡೆ ಕಾಣಿಸಿಕೊಂಡಿತು. ಬೆಳಿಗ್ಗೆ 9.30 ಕ್ಷಿಪ್ರ ಕಾರ್ಯಪಡೆಯ ಸಿಬ್ಬಂದಿ ಶಸ್ತ್ರಾಸ್ತ್ರಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದರು. ಪೊಲೀಸ್ ಕವಾಯತು ಮೈದಾನದಿಂದ ಆರಂಭಿಸಿದ ಪಥಸಂಚಲನ ಬಾರ್ಲೈನ್ ಮಾರ್ಗವಾಗಿ, ಪ್ರಜ್ವಲ್ ಹೋಟೆಲ್ ಮುಂದೆ ಸಾಗಿ, ಮದಕರಿ ವೃತ್ತ, ಅಂಬೇಡ್ಕರ್ ವೃತ್ತ, ಪ್ರವಾಸಿ ಮಂದಿರ, ಎಸ್ಬಿಐ ವೃತ್ತ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆಯಲ್ಲಿ ಸಾಗಿತು.