‘ಅರಣ್ಯ ಭೂಮಿ ಸಾಗುವಳಿ ಮಾಡುತ್ತಿರುವ ರೈತರು ನಮೂನೆ ಒಂದರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅರಣ್ಯ ಇಲಾಖೆ ಅವರನ್ನು ಹೊರ ಹಾಕಿದೆ. ಅವರಿಗೆ ಕಿರುಕುಳ ನೀಡಿ, ದೌರ್ಜನ್ಯ ಎಸಗಲಾಗುತ್ತಿದೆ. ಹೀಗಾಗಿ ಇಂಥ ರೈತರು ನಿಸ್ಸಹಾಯಕರಾಗಿ ಜಮೀನು ಪಡೆಯುವುದರಿಂದ ವಂಚಿತರಾಗಿದ್ದಾರೆ’ ಎಂದರು. ಕೆ.ಎಚ್.ಪಾಟೀಲ, ನೀಲಕಂಠಪ್ಪ ಸಿಂಪಗೇರ, ಚನ್ನಯ್ಯ ಹಿರೇಮಠ, ಶಿವಪ್ಪ ಲಮಾಣಿ, ಶಿವಪುತ್ರಯ್ಯ ಹಿರೇಮಠ, ಬಸವರಾಜ ಬೆಳ್ಳಿಗಟ್ಟಿ, ನಿಂಗಪ್ಪ ಭಜಂತ್ರಿ ಇದ್ದರು.