ಲಕ್ಷ್ಮೇಶ್ವರ: ‘ಕಾಯಕ ನಿಧಿ ಯೋಜನೆಯಡಿ ನಿವೃತ್ತಿ ಪರಿಹಾರ, ಪಿಂಚಣಿ, ಸಮವಸ್ತ್ರ ಮತ್ತು ಶಿಕ್ಷಣಕ್ಕೆ ಸಹಾಯ ನೀಡುವುದು, ಉಚಿತ ವಸತಿ ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲು ಎಪಿಎಂಸಿ ಹಮಾಲಿ ಕಾರ್ಮಿಕರಿಂದ ಬೆಳಗಾವಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ನ ರಾಜ್ಯ ಪ್ರಧಾನಕಾರ್ಯದರ್ಶಿ ಮಹೇಶ ಪತ್ತಾರ ಇಲ್ಲಿ ನಡೆದ ಸಭೆಯಲ್ಲಿ ಹೇಳಿದರು.
ಗೋವಿಂದಪ್ಪ ಶೇರಸೂರಿ, ಸಿಐಟಿಯು ಮುಖಂಡ ವಿನಾಯಕ ಕುಂಬಾರ, ಕಾರ್ಯದರ್ಶಿ ಬಸಪ್ಪ ಕೆರೂರ, ಹನಮಂತಪ್ಪ ಶೇರಸೂರಿ, ಗಂಗಪ್ಪ ಗಂಗಣ್ಣವರ, ಹೆಗ್ಗಪ್ಪ ಗದ್ದಿ, ಹುಸೇನ್ಸಾಬ್ ಬಸವನಕೊಪ್ಪ, ಹಸನ್ಸಾಬ್ ಕೊಪ್ಪದ ಇದ್ದರು.