‘ಪ್ರತಿವರ್ಷ ಗೋವಿನಜೋಳ ಬೇರೆ ದೇಶಗಳಿಗೆ ರಫ್ತಾಗುತ್ತಿತ್ತು. ಈಗ ರಫ್ತಿಗೆ ತಡೆ ಒಡ್ಡಲಾಗಿದೆ. ಇದರಿಂದ ದರ ಏರಿಕೆಯಾಗಿಲ್ಲ. ಈ ಸಮಸ್ಯೆ ಎದುರಿಸಲು ರೈತರು ತಮ್ಮ ಬೆಳೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಕೃಷಿ ತಜ್ಞರ, ವಿಜ್ಞಾನಿಗಳ ಸಲಹೆ ಪಡೆದು ಬೇರೆ ಬೇರೆ ಬೆಳೆ ಬೆಳೆಯಬೇಕು’ ಎಂದು ವರ್ತಕ ಚನ್ನಬಸಪ್ಪ ವಾಲಿ ಹೇಳಿದರು.