ನಂಗಲಿ: ಇಲ್ಲಿಗೆ ಸಮೀಪದ ಪದ್ಮಘಟ್ಟ, ಮಲ್ಲೆಕುಪ್ಪ, ಶ್ರೀರಂಗಪುರ ಹಾಗೂ ಬಾಚಮಾಕನಹಳ್ಳಿ ಕೆರೆಗಳ ತೂಬಿನಿಂದ ನೀರು ಪೋಲಾಗುತ್ತಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಕೆರೆಗಳು ತುಂಬಿ ಕೋಡಿ ಹರಿದಿವೆ. ಒಂದೂವರೆ ದಶಕದ ನಂತರ ಈ ಭಾಗದ ಕೆರೆಗಳು ತುಂಬಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಕೆರೆ ನೀರನ್ನು ಪೋಲಾಗದಂತೆ ತೂಬುಗಳನ್ನು ಕಡ್ಡಾಯವಾಗಿ ಮುಚ್ಚಬೇಕೆಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.