ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣವನ್ನು ರಾಜಧಾನಿ ಮಾಡಿಕೊಂಡು 17 ವರ್ಷ ಆಳ್ವಿಕೆ ನಡೆಸಿದ ಟಿಪ್ಪು ಸುಲ್ತಾನ್ ಹಿಂದೂ ದೇವಾಲಯಗಳಿಗೆ ನೀಡಿದ ಕೊಡುಗೆ, ಉಡುಗೊರೆಗಳು ಇನ್ನೂ ಜೀವಂತವಾಗಿವೆ. ಇಲ್ಲಿನ ಶ್ರೀರಂಗನಾಥ (ಆದಿ ರಂಗ) ದೇಗುಲಕ್ಕೆ ನಾಲ್ಕು ಬೆಳ್ಳಿ ಬಟ್ಟಲು ನೀಡಿದ್ದು, ಅವುಗಳಿಂದಲೇ ಇಂದಿಗೂ ಅರ್ಚಕರು ನಿತ್ಯ ಅರ್ಚನೆ ಮಾಡುತ್ತಿದ್ದಾರೆ.