ಈ ಕುರಿತು ಕೃಷಿ ಇಲಾಖೆಯ ಅಧಿಕಾರಿ ದೇವರಾಜ್ ಅವರನ್ನು ಸಂರ್ಕಿಸಿದಾಗ 'ಕೆಸ್ತೂರಿನ ರೈತ ಸಂರ್ಕ ಕೇಂದ್ರ ಮದ್ದೂರು ತಾಲ್ಲೂಕಿಗೆ ಸೇರಿದೆ. ರಾಗಿಯ ಕೆಲವು ತಾಕುಗಳಲ್ಲಿ 2-3 ವರ್ಷಗಳಿಗೊಮ್ಮೆ ಹೀಗಾಗುವುದಿದೆ. ಒಂದು ಬಗೆಯ ವೈರಸ್ ನಿಂದ ಹರಡುವ ಫೈಟೋಪ್ಲಾಸಮ್ ಎಂಬ ಸಾಂಕ್ರಾಮಿಕ ರೋಗ ಇದಕ್ಕೆ ಕಾರಣ. ಆಕಸ್ಮಿಕವಾಗಿ ಪ್ರಮಾಣೀಕೃತ ಬಿತ್ತನೆಯ ಕಾಳುಗಳ ಜೊತೆಗೆ ಸೇರ್ಪಡೆಯಾಗುವ ರೋಗ ಬಾದಿತ ಕಾಳುಗಳಿಂದ ಸಮಸ್ಯೆ ಉಂಟಾಗುತ್ತದೆ' ಎಂದರು.