ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿರುದ್ಧವೂ ಅವರು ಟೀಕೆ ಮಾಡಿದ್ದಾರೆ. ‘ಎಂ.ಬಿ.ಪಾಟೀಲ ಜನ ನಾಯಕನಾಗಿದ್ದರೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಲಿ’ ಎಂದಿರುವ ಶಿವಾನಂದ, ‘ವರಿಷ್ಠರಿಂದ ಜಲಸಂಪನ್ಮೂಲ ಖಾತೆ ಪಡೆದಿದ್ದಾನೆ ಎಂದು ಸಿದ್ದರಾಮಯ್ಯ ನನ್ನ ಎದುರೇ ಹೇಳಿದ್ದಾನೆ’ ಎಂದು ಏಕ ವಚನ ಪ್ರಯೋಗಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶಿವಾನಂದ ಪಾಟೀಲರ ಪ್ರತಿಕ್ರಿಯೆಗೆ ಯತ್ನಿಸಿದರೂ, ಮೊಬೈಲ್ ಕರೆ ಸ್ವೀಕರಿಸಲಿಲ್ಲ.