ಗುಜರಾತಿನ ಯುವ ಮುಖಂಡರಾದ ಅಲ್ಪೇಶ್ ಠಾಕೂರ್, ಹಾರ್ದಿಕ್ ಪಟೇಲ್ ಮತ್ತು ಜಿಗ್ನೇಶ್ ಮೆವಾನಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊ
ಳ್ಳಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಹಿಂದುಳಿದ ವರ್ಗದ ಮುಖಂಡ ಅಲ್ಪೇಶ್ ಅವರು ಕಾಂಗ್ರೆಸ್ ಸೇರಿದ್ದು ಚುನಾವಣೆಗೆ ಸ್ಪರ್ಧಿಸುವ ಆಸಕ್ತಿ ಹೊಂದಿದ್ದಾರೆ. ಪಟೇಲ್ ಸಮುದಾಯದ ಹಾರ್ದಿಕ್ ಮತ್ತು ದಲಿತ ಸಮುದಾಯದ ಮೆವಾನಿ ಅವರ ಮೂಲಕ ಇಡೀ ಸಮುದಾಯದ ಮತ ಪಡೆಯುವ ಬಗ್ಗೆ ಕಾಂಗ್ರೆಸ್ ಕಾರ್ಯತಂತ್ರ ರೂಪಿಸುತ್ತಿದೆ.