ಇದೇ ರಸ್ತೆಗೆ ಹೊಂದಿಕೊಂಡಂತೆ ಗ್ರಾಮದ ಪುರಾತನ ಕೆರೆಯೂ ಇದೆ. ‘ಸ್ವಚ್ಛ ಭಾರತ ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತದೆ. ಆದರೆ ಗ್ರಾಮಸ್ಥರು ಮಾತ್ರ ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಶೌಚಾಲಯಗಳನ್ನು ಉಪಯೋಗಿಸ್ರೀ ಅಂತಾ ನಾವೂ ಹೇಳೇವ್ರೀ, ಆದ್ರೆ ಅವರ ತಲೆಯೊಳಗೆ ಹೋಗ್ತಿಲ್ಲ’ ಎಂದು ಹೆಸರು ಹೇಳಲು ಬಯಸದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಹೇಳಿದರು.