ವೀರಶೈವ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿ, ‘ಬ್ರಿಟಿಷರ ವಸಹಾತುಶಾಹಿ ಮತ್ತು ಉಳಿಗಮಾನ್ಯ ಪದ್ಧತಿ ನಿವಾರಣೆಗೆ ಕಾನೂನಾತ್ಮಕ ರೂಪರೇಷೆ ನೀಡಿದವರು ಟಿಪ್ಪು. ಮೇಧಾವಿ ಆಗಿದ್ದ ಅವರು ದೇಶಪ್ರೇಮದ ಜೊತೆಗೆ ನಾಡಿನ ರೈತರು, ಶೋಷಿತ, ದಲಿತ, ನೊಂದವರ ಧ್ವನಿಯಾಗಿ ನೀರಾವರಿ, ರಸ್ತೆ, ಒಡ್ಡು, ಕೆರೆ ಕಟ್ಟೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು’ ಎಂದರು.