ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್ಕೆಸಿಸಿಐ) ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ರಾವ್ ಅವರು ಲಘು ಧಾಟಿಯಲ್ಲೇ ಸಲಹೆ ನೀಡಿದರೂ ಗೃಹಸಚಿವರು ಅದನ್ನು ಲಘುವಾಗಿ ಸ್ವೀಕರಿಸಲಿಲ್ಲ. ಅಲ್ಲಿಯವರೆಗೂ ನಯವಾಗಿ ಮಾತನಾಡುತ್ತಿದ್ದ ಸಚಿವರು, ಈ ಸಲಹೆ ಕೇಳಿ ಕೊಂಚ ಗರಂ ಆದರು. ‘ನಾನು ಪೊಲೀಸ್ ಅಧಿಕಾರಿಗಳೊಂದಿಗೆ ನಡೆಸುವ ಸಭೆಗಳಲ್ಲಿ ಹೇಗೆ ಮಾತನಾಡುತ್ತೇನೆ ಎಂದು ನಿಮಗೆ ಗೊತ್ತೇನ್ರಿ? ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾಗುವ ವರದಿಗಳನ್ನು, ವಾಹಿನಿಗಳಲ್ಲಿ ನನ್ನ ಸಂದರ್ಶನಗಳನ್ನು ನೋಡಿದಿದ್ದರೆ ನೀವು ಹೀಗೆ ಹೇಳುತ್ತಿರಲಿಲ್ಲ. ಎಲ್ಲಿ ಹೇಗೆ ಮಾತನಾಡಬೇಕು ಎನ್ನುವುದು ನನಗೆ ಚೆನ್ನಾಗಿ ತಿಳಿದಿದೆ’ ಎಂದು ಖಡಕ್ ಆಗಿಯೇ ಉತ್ತರ ನೀಡಿದರು.