ಎಫ್ಐಆರ್ ದಾಖಲಿಸಲು ಮನವಿ: ಘಟನೆ ಬಗ್ಗೆ ಮೃತ ಉಮ್ಮರ್ ಅವರ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಜತೆಗೆ, ಎಫ್ಐಆರ್ ದಾಖಲಿಸುವಂತೆಯೂ ಮನವಿ ಮಾಡಿದ್ದಾರೆ. ಉಮ್ಮರ್ ಹಾಗೂ ಜತೆಗಿದ್ದವರು ಹೈನುಗಾರಿಕೆ ಉದ್ದೇಶಕ್ಕೆ ದನಗಳನ್ನು ಸಾಗಿಸುತ್ತಿದ್ದರೇ ವಿನಾ ಕೊಲ್ಲುವುದಕ್ಕಾಗಿ ಅಲ್ಲ. ಈ ವೇಳೆ ವಾಹನವೊಂದರಲ್ಲಿ ಬಂದ 7–8 ಜನರ ಗುಂಪು ಅವರನ್ನು ಅಡ್ಡಗಟ್ಟಿದೆ. ಈ ಪೈಕಿ ರಾಕೇಶ್ ಎಂದು ಹೇಳಿಕೊಂಡ ಒಬ್ಬ ವ್ಯಕ್ತಿ ತಮ್ಮದು ‘ಗೋರಕ್ಷಕರ ತಂಡ’ ಎಂದು ಹೇಳಿರುವುದಾಗಿಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.