ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರೊಂದಿಗೆ ಬೆರೆಯಲಿ

Last Updated 12 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹೊಸ ಪಕ್ಷ ಕಟ್ಟಿರುವ ನಟ ಉಪೇಂದ್ರ ಅವರು ಚುನಾವಣೆಗೆ ಧುಮುಕುವುದಕ್ಕೂ ಮೊದಲು ಸಾರ್ವಜನಿಕವಾಗಿ ಜನರ ಮಧ್ಯೆ ಬೆರೆತು ಸೇವೆ ಅಥವಾ ಹೋರಾಟಗಳನ್ನು ಮಾಡಿ ಜನರ ವಿಶ್ವಾಸವನ್ನು ಸಂಪಾದಿಸಬೇಕು. ಆ ಮೂಲಕ ಜನರ ಸಮಸ್ಯೆಗಳ ಅರಿವು ಮತ್ತು ಅನುಭವ ಅವರಿಗೆ ಆಗಬೇಕು. ಹೆಜ್ಜೆ ಹೆಜ್ಜೆಗೂ ನಡೆಯುವ ಮೋಸ, ವಂಚನೆ, ಲಂಚಗಳ ಮುಖವಾಡದ ಪರಿಚಯ ಹಾಗೂ ಇದನ್ನು ಎದುರಿಸುವ ಶಕ್ತಿಯನ್ನು ಅನುಭವದ ಮೂಲಕ ಮಾತ್ರ ಪಡೆಯಲು ಸಾಧ್ಯ.

ಚಕ್ರವ್ಯೂಹದಂತಹ ಇಂದಿನ ರಾಜಕೀಯ ವ್ಯವಸ್ಥೆಯನ್ನು, ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವವರು ಭೇದಿಸಲು ಸಾಧ್ಯವೇ? ಜನಸಂಪರ್ಕ ಇಲ್ಲದೆಯೇ ಚುನಾವಣೆಯಲ್ಲಿ ಗೆದ್ದು ವ್ಯವಸ್ಥೆಯನ್ನು ಶುದ್ಧಗೊಳಿಸುತ್ತೇವೆ ಎಂದು ಭಾವಿಸುವುದು ಹುಚ್ಚುತನವೆನಿಸುತ್ತದೆ.

–ರೇಣುಕ ಆರಾಧ್ಯ ಎಚ್.ಬಿ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT