ಹೊಸ ಪಕ್ಷ ಕಟ್ಟಿರುವ ನಟ ಉಪೇಂದ್ರ ಅವರು ಚುನಾವಣೆಗೆ ಧುಮುಕುವುದಕ್ಕೂ ಮೊದಲು ಸಾರ್ವಜನಿಕವಾಗಿ ಜನರ ಮಧ್ಯೆ ಬೆರೆತು ಸೇವೆ ಅಥವಾ ಹೋರಾಟಗಳನ್ನು ಮಾಡಿ ಜನರ ವಿಶ್ವಾಸವನ್ನು ಸಂಪಾದಿಸಬೇಕು. ಆ ಮೂಲಕ ಜನರ ಸಮಸ್ಯೆಗಳ ಅರಿವು ಮತ್ತು ಅನುಭವ ಅವರಿಗೆ ಆಗಬೇಕು. ಹೆಜ್ಜೆ ಹೆಜ್ಜೆಗೂ ನಡೆಯುವ ಮೋಸ, ವಂಚನೆ, ಲಂಚಗಳ ಮುಖವಾಡದ ಪರಿಚಯ ಹಾಗೂ ಇದನ್ನು ಎದುರಿಸುವ ಶಕ್ತಿಯನ್ನು ಅನುಭವದ ಮೂಲಕ ಮಾತ್ರ ಪಡೆಯಲು ಸಾಧ್ಯ.