‘ಬಡ್ತಿಯಲ್ಲಿ ಮೀಸಲಾತಿ ಬಂದಿರುವುದರಿಂದ ನನ್ನ ವಿದ್ಯಾರ್ಥಿಯೇ ನನಗೆ ಬಾಸ್ ಆಗಿದ್ದಾನೆ’ ಎಂದು ಎಂ. ನಾಗರಾಜ್ ಎಂಬ ಉದ್ಯೋಗಿ ಹೇಳಿಕೊಂಡಿದ್ದಾರೆ. ಇಂಥ ಹಲವು ಉದಾಹರಣೆಗಳು ರಾಜ್ಯದಲ್ಲಿ ಸಿಗಬಹುದು. ಅಂಥವರು ಮಾನಸಿಕವಾಗಿ ವ್ಯಸನ ಪಡುವುದು ಸಹಜ. ಮೀಸಲಾತಿ ಮೂಲಕ ಬಡ್ತಿ ಪಡೆದು ಬಂದವರಲ್ಲಿ ಅನುಭವ ಕಡಿಮೆ ಇರುತ್ತದೆ. ಇದು ಒಟ್ಟಾರೆ ಕೆಲಸ–ಕಾರ್ಯಗಳ ಮೇಲೂ ಪರಿಣಾಮ ಉಂಟುಮಾಡಬಹುದು. ಉದ್ಯೋಗಿಗಳ ಮನಸ್ಥಿತಿಯನ್ನು ಸರ್ಕಾರ ಅರ್ಥಮಾಡಿಕೊಂಡು, ನ್ಯಾಯಾಲಯ ನೀಡಿರುವ ತೀರ್ಪನ್ನು ಗೌರವಿಸಿ ಜಾರಿಗೆ ತರಬೇಕು.