ದ್ವೇಷ ಹರಡಿ ಅಧಿಕಾರ ಸಾಧ್ಯವಿಲ್ಲ: ‘ಶರಣರು, ಸೂಫಿಗಳು, ಸಂತರು, ದಾಸರು ಬದುಕಿ ಬಾಳಿದ ಈ ನೆಲದಲ್ಲಿ ಸಾಮರಸ್ಯ ನೆಲೆಗೊಂಡಿದೆ. ಇಲ್ಲಿ ಜಾತಿ–ಧರ್ಮಗಳ ನಡುವೆ ಬೆಂಕಿ ಹಚ್ಚಿ, ದ್ವೇಷ ಹುಟ್ಟಿಸಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ರಾಜ್ಯದ ಜನತೆ ಅದಕ್ಕೆ ಸೊಪ್ಪು ಹಾಕುವುದಿಲ್ಲ’ ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ನೀಡಿದರು.
ರಾಜ್ಯಮಟ್ಟದಲ್ಲಿ ಅಲೆಮಾರಿಗಳ ಮೊದಲ ಸಮ್ಮಿಲನ ಎಂದು ಹೇಳಲಾದ ಈ ಸಮಾವೇಶದಲ್ಲಿ ಗೋಂಧಳಿ, ಬುಡಬುಡಿಕೆ, ಜೋಶಿ, ಸೂರ್ಯವಂಶಿ, ಕೊಂಡೆ, ಗೋತ್ರಾ