ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಅಚ್ಚುನಾಯಕ ಸಾಹಸ ಪುರುಷ. ಆತನ ಬಗ್ಗೆ ವಿಚಾರ ಸಂಕಿರಣ, ಮತ್ತಿತರ ಕಾರ್ಯಕ್ರಮ ಮಾಡಿ ಜನತೆಗೆ ತಿಳಿಸುವ ಅಗತ್ಯವಿದೆ ಎಂದರು. ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಮಾತನಾಡಿ, ಕೊಡವರ ಮೂಲಕ ಸಂಸ್ಕೃತಿ, ಆಚಾರ-ವಿಚಾರ ಉಳಿಯಬೇಕಾದರೆ ಐನ್ಮನೆಯೊಂದಿಗಿನ ಸಂಬಂಧ ಮುಂದುವರಿಯಬೇಕು. ಕೊಡವ ಸಮಾಜಗಳು ಕೇವಲ ಕಲ್ಯಾಣ ಮಂಟಪಗಳಾಗದೆ ಕೊಡವಾಮೆಯ ಪೋಷಣೆಗೆ ಮುಂದಾಗಬೇಕು ಎಂದರು.