ಶಾಸಕ ಕೆ.ಎಂ. ತಿಮ್ಮರಾಯಪ್ಪ ಮಾತನಾಡಿ, ಶತಮಾನಗಳ ಕಾಲ ಚಾಕರಿ ಮಾಡಿದ ಜನ ಸಮುದಾಯಕ್ಕೆ ಸಂವಿಧಾನಬದ್ಧ ಮೀಸಲಾತಿ, ಸವಲತ್ತುಗಳು ಸಿಗುತ್ತಿವೆ. ಸೌಲಭ್ಯಗಳನ್ನು ಕೇಳಿ ಪಡೆಯುವುದು ತಳ ಸಮುದಾಯಗಳ ಜನತೆಯ ಹಕ್ಕು. ತಾಲ್ಲೂಕಿನಲ್ಲಿ 125ಕ್ಕೂ ಹೆಚ್ಚು ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ವರ್ಷ ₹ 6 ಕೋಟಿಯನ್ನು ಸಮುದಾಯದವರ ಅಭಿವೃದ್ಧಿಗಾಗಿ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.