ಈ ಸಂಪಾದಕೀಯದ ಆಶಯಗಳು ಈಡೇರಿದರೆ ಕ್ರೀಡಾಕ್ಷೇತ್ರ ಸಮೃದ್ಧವಾಗುತ್ತದೆ. ‘ಏಷ್ಯಾ ಕಪ್’ ಗೆಲುವಿನ ರೂವಾರಿ ಸವಿತಾ ಅವರ ಪರಿಶ್ರಮಕ್ಕೆ ದೇಶವೇ ಹೆಮ್ಮೆ ಪಡುತ್ತಿದೆ. ಆದರೆ ಅವರಿಗೆ ಒಂಬತ್ತು ವರ್ಷಗಳಿಂದ ಉದ್ಯೋಗ ಕಲ್ಪಿಸಿಕೊಡದಿರುವುದು ವಿಪರ್ಯಾಸವೇ ಸರಿ. ಮುಂದಿನ ದಿನಗಳಲ್ಲಾದರೂ ಸರ್ಕಾರಗಳು ಇಂಥ ಕ್ರೀಡಾಪಟುಗಳಿಗೆ ಉದ್ಯೋಗ ಕರುಣಿಸಲಿ. ರಾಜ್ಯ ಸರ್ಕಾರಗಳು ಸಾಧಕರಿಗೆ ಬಹುಮಾನಗಳನ್ನು ನೀಡಿ ಉತ್ತೇಜಿಸುವಂತಾಗಲಿ. ನಮ್ಮ ತಂಡ ವಿಶ್ವ ಮಟ್ಟದಲ್ಲಿ ಕಂಗೊಳಿಸಲಿ, ಮತ್ತೊಮ್ಮೆ ಸಾಹಸಿ ವನಿತೆಯರಿಗೆ ಜಯವಾಗಲಿ.