ಅದರಂತೆ ನಮ್ಮ ಪಕ್ಷವೂ ಕೂಡ, ಅವರೆಲ್ಲರಿಗಿಂತ ಭಿನ್ನವಾಗಿರುವ ರ್ಯಾಲಿಯೊಂದನ್ನು ಹಮ್ಮಿಕೊಂಡಿದೆ. ನವೆಂಬರ್ 26ರಿಂದ ‘ಜನಾಧಿಕಾರಕ್ಕೆ ಜನಸಂಕಲ್ಪ ಜಾಥಾ’ ರ್ಯಾಲಿ ಆರಂಭವಾಗಲಿದೆ. ಮಾನವೀಯ ಮೌಲ್ಯಗಳನ್ನು ಅರಿತವರು, ಪ್ರಜ್ಞಾವಂತ ನಾಗರಿಕರು, ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ತಡೆಯ ಬಯಸುವವರು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಹೇಳಿದರು. ಆರ್ಪಿಐ ಜಿಲ್ಲಾ ಘಟಕದ ಅಧ್ಯಕ್ಷ ಎಲಿಷಾ ಎಲಕಪಾಟಿ, ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲಪ್ಪ ಎನ್. ವಡ್ಡರ, ಇಮ್ತಿಯಾಜ್ ಹಾಜರಿದ್ದರು.