ಗಂಗಾವತಿ ಬಂದ್ ಘಟನೆಯಿಂದಾಗಿ ನಗರ ಮಾತ್ರವಲ್ಲ, ಗ್ರಾಮೀಣ ಭಾಗದ ಮಂದಿರ, ಮಸೀದಿಗಳಲ್ಲಿ ಜನ ಸೇರಲಿದ್ದು, ಇದು ಕೋಮು ಗಲಭೆಗೆ ಕಾರಣವಾಗಲಿದೆ. ಶಾಂತಿ ನೆಮ್ಮದಿ ಕದಡಲು ಯತ್ನಿಸುತ್ತಿರುವ ಈ ಇಬ್ಬರ ಮೇಲೆ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಬೇಕು ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಾಜ್ಯ ಘಟಕದ ಅಧ್ಯಕ್ಷರೂ ಆದ ನಾಗೇಶ್ವರ ರಾವ್ ಆಗ್ರಹಿಸಿದ್ದಾರೆ.