ಜ್ಞಾನಬುತ್ತಿ ಸತ್ಸಂಗ ಕೇಂದ್ರದ ಶರಣಬಸವರಾಜಪ್ಪ ಮಾತನಾಡಿ, ನಮ್ಮ ರಾಷ್ಟ್ರದಲ್ಲಿ 15 ಭಾಷೆಗಳು ಅಧಿಕೃತವಾಗಿವೆ. ಇವುಗಳಲ್ಲಿ ಕೆಲವಕ್ಕೆ ಲಿಪಿ ಇಲ್ಲ. ಇನ್ನೂ ಕೆಲವು ಭಾಷೆ ಮಾತಿಗಷ್ಟೆ ಸೀಮಿತವಾಗಿವೆ. ಆದರೆ ಕನ್ನಡಕ್ಕೆ ಲಿಪಿ ಮತ್ತು ಭಾಷೆ ಎರಡೂ ಇದ್ದು, ಇದಕ್ಕೆ ತನ್ನದೇ ಆದ ವಿಶೇಷ ಪರಂಪರೆ ಇದೆ. ಹೀಗಾಗಿ ಕನ್ನಡವನ್ನು ಪ್ರೀತಿಸುವ, ಬೆಳೆಸುವತ್ತ ಎಲ್ಲರೂ ಮುಂದಾಗಬೇಕು ಎಂದರು.