‘ಲಕ್ಷ್ಮಿ ಹೆಬ್ಬಾಳ್ಕರ್ ಅವರು 18ರಂದು ಸಂಜೆ 4 ಗಂಟೆ ವೇಳೆಗೆ ಕಡೂರಿಗೆ ಬರುವರು. ಸಂಜೆ 6 ಗಂಟೆ ಹೊತ್ತಿಗೆ ಕಲ್ಕೆರೆ ಗೊಲ್ಲರಹಟ್ಟಿಗೆ ತಲುಪುವರು. ಕಡೂರು ತಾಲ್ಲೂಕಿನಲ್ಲಿ ಸುಮಾರು 24 ಗೊಲ್ಲರಹಟ್ಟಿಗಳಿದ್ದು, ಗೊಲ್ಲರ ಸಮುದಾಯ ಜನಸಂಖ್ಯೆ ಸುಮಾರು 12 ಸಾವಿರ ಇದೆ. ಸಮುದಾಯವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಅನಾದಿಕಾಲದಿಂದಲೂ ಮೌಢ್ಯ, ಗೊಡ್ಡು ಸಂಪ್ರದಾಯಗಳು ಸಮುದಾಯದಲ್ಲಿ ಆಚರಣೆಯಲ್ಲಿವೆ. ಅನಿಷ್ಠ ಪದ್ಧತಿಗಳನ್ನು ಕೈಬಿಡುವಂತೆ ಲಕ್ಷ್ಮಿ ಅವರು ಮನವರಿಕೆ ಮಾಡುವರು’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.