ತಾಲ್ಲೂಕಿನ ಮುನ್ನೋಳ್ಳಿ, ಕಮಲಾನಗರ, ಯಳಸಂಗಿ, ಖಜೂರಿ, ನಿಂಬಾಳ, ಮಾಡಿಯಾಳ, ನಿಂಬರ್ಗಾ, ಅಂಬಲಗಾ, ಬೆಳಮಗಿ ಮತ್ತಿತರ ಕೇಂದ್ರಗಳಲ್ಲಿ ಸರ್ಕಾರದಿಂದ ಹೆಸರು, ಉದ್ದು ಖರೀದಿಗಳು ತೆರೆಯಲಾಗಿತ್ತು. ಆದರೆ, ಕಳೆದ ಮೂರು ದಿನಗಳಿಂದ ಚೀಲದ ಕೊರತೆ ಕಾಡುತ್ತಿದೆ. ಇದರಿಂದ ಮಧ್ಯದಲ್ಲಿಯೇ ಉದ್ದು, ಹೆಸರು ಖರೀದಿ ಸ್ಥಗಿತಗೊಂಡಿದೆ. ‘ಅನೇಕ ರೈತರು ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಲು ಹೆಸರು ನೋಂದಾಯಿಸಿ ಸರದಿಗಾಗಿ ಕಾಯುತ್ತಿದ್ದಾರೆ. ಕೆಲ ರೈತರು ಖರೀದಿ ಕೇಂದ್ರಗಳಲ್ಲಿ ಉದ್ದು ಬೆಳೆ ಚೀಲ ತಂದು ಒಟ್ಟಿದ್ದಾರೆ.