ಹಿರಿಯ ಮುಖಂಡರಾದ ಸುಶೀಲಾಬಾಯಿ ಬಸವರಾಜ ಕೊರವಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜೀದ್ ಪಟೇಲ್, ಆರ್.ಆರ್.ಪಾಟೀಲ, ರವಿಶಂಕರರೆಡ್ಡಿ ಮುತ್ತಂಗಿ ಮಾತನಾಡಿದರು. ದೌಲಪ್ಪ ಸುಣಗಾರ, ಸಿದ್ದಯ್ಯ ಸ್ವಾಮಿ, ರಜಾಕ್ ಪಟೇಲ್, ಸಂಜು ಮುತ್ತಟ್ಟಿ, ಶಿವಕುಮಾರ ಶೇರಿಕಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.