ತಮಿಳುನಾಡು ಸಿಬಿಐ ಕಚೇರಿ ತನಿಖಾಧಿಕಾರಿಗಳು ಸಿದ್ದಾಪುರ ಸಮೀಪದ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಸಂಸ್ಥೆಯ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದು, ಒಂದು ವಾರದಿಂದ ಗೋಪ್ಯವಾಗಿ ಪ್ರಕರಣದ ಮಾಹಿತಿ ಕಲೆ ಹಾಕುತ್ತಿದ್ದರು. ಬುಧವಾರ ಬೆಳಿಗ್ಗೆ ದೆಹಲಿಯ ವಿಧಿ ವಿಜ್ಞಾನ ಪ್ರಯೋಗಾಲಯದ ತಂಡದೊಂದಿಗೆ ಬೆಂಗಳೂರಿಗೆ ತೆರಳಿರುವ ಅಧಿಕಾರಿಗಳು, ಮತ್ತೆ ಚೆಟ್ಟಳ್ಳಿಗೆ ಬರುವ ಸಾಧ್ಯತೆಯಿದೆ.