ಡಾ. ರಾಜೇಂದ್ರ ಪ್ರಸಾದರು ವಿಷಯಾಧರಿತವಾಗಿ ಅನೇಕ ಬಾರಿ ನೆಹರು ಅವರನ್ನು ವಿರೋಧಿಸಿದ್ದರು. ರಾಜೇಂದ್ರ ಪ್ರಸಾದರು ಬಿಹಾರದಲ್ಲಿ ಕಾಲವಾದಾಗ, ನೆಹರು ಅಲ್ಲಿಗೆ ಹೋಗಲೇ ಇಲ್ಲ. ಅಂದಿನ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್, ತಮ್ಮ ಜೊತೆ ಬಿಹಾರಕ್ಕೆ ಬರುವಂತೆ ನೆಹರುಗೆ ತಿಳಿಸಿದ್ದುಂಟು. ಆದರೂ ನೆಹರು, ರಾಷ್ಟ್ರಪತಿಗಳ ಮಾತನ್ನು ನಿರಾಕರಿಸಿ ರಾಜಸ್ಥಾನದ ಕಾರ್ಯಕ್ರಮವೊಂದಕ್ಕೆ ಹೋದರು.