ಮುಧೋಳ: ‘ರಾಜ್ಯದ ಜನತೆ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ’ ಎಂದು ಜೆಡಿಎಸ್ ಬಾಗಲಕೋಟ ಜಿಲ್ಲೆ ಮಹಿಳಾ ವಿಭಾಗದ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷೆ ಪಾರ್ವತಿ ವಡಗೇರಿ ಹೇಳಿದರು.
ನಗರದಲ್ಲಿ ಜೆಡಿಎಸ್ ನಡಿಗೆ ಪ್ರತಿ ಮನೆ– ಮನೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ಮನೆಗಳಿಗೆ ಭೇಟಿ ನೀಡಿದಾಗ ಎಲ್ಲಡೆ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಸಾಯಿ ನಗರ ಹಾಗೂ ಮದರಸಾ ಕಡೆಗಳಲ್ಲಿ ಮನೆ– ಮನೆಗೆ ತೆರಳಿ 20 ತಿಂಗಳ ಕುಮಾರಸ್ವಾಮಿಯವರ ಆಡಳಿತದ ಅಭಿವೃದ್ಧಿ ಕಾರ್ಯಗಳ ಪ್ರತಿಗಳನ್ನು ನೀಡಿ ಅವರ ಸಾಧನೆಗಳ ಕುರಿತು ಹೇಳಿ ಬದಲಾವಣೆಗೆ ನಿಮ್ಮ ಆಯ್ಕೆ ಇರಲಿ ಎಂದು ಹೇಳಿದರು.