ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಚ್‌ಡಿಕೆ ಸಾಧನೆ ಜನರಿಗೆ ತಿಳಿಸಿ’

Last Updated 17 ನವೆಂಬರ್ 2017, 5:16 IST
ಅಕ್ಷರ ಗಾತ್ರ

ಮುಧೋಳ: ‘ರಾಜ್ಯದ ಜನತೆ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತದಿಂದ ಬೇಸತ್ತಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು ಎಂದು ಬಯಸುತ್ತಿದ್ದಾರೆ’ ಎಂದು ಜೆಡಿಎಸ್‌ ಬಾಗಲಕೋಟ ಜಿಲ್ಲೆ ಮಹಿಳಾ ವಿಭಾಗದ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷೆ ಪಾರ್ವತಿ ವಡಗೇರಿ ಹೇಳಿದರು.

ನಗರದಲ್ಲಿ ಜೆಡಿಎಸ್ ನಡಿಗೆ ಪ್ರತಿ ಮನೆ– ಮನೆಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ಮನೆಗಳಿಗೆ ಭೇಟಿ ನೀಡಿದಾಗ ಎಲ್ಲಡೆ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಸಾಯಿ ನಗರ ಹಾಗೂ ಮದರಸಾ ಕಡೆಗಳಲ್ಲಿ ಮನೆ– ಮನೆಗೆ ತೆರಳಿ 20 ತಿಂಗಳ ಕುಮಾರಸ್ವಾಮಿಯವರ ಆಡಳಿತದ ಅಭಿವೃದ್ಧಿ ಕಾರ್ಯಗಳ ಪ್ರತಿಗಳನ್ನು ನೀಡಿ ಅವರ ಸಾಧನೆಗಳ ಕುರಿತು ಹೇಳಿ ಬದಲಾವಣೆಗೆ ನಿಮ್ಮ ಆಯ್ಕೆ ಇರಲಿ ಎಂದು ಹೇಳಿದರು.

ಮುಖಂಡರಾದ ವೆಂಕಪ್ಪ ಪೂಜಾರಿ, ಸೋಮಪ್ಪ ಹಲಕಿ, ರಾಜೇಂದ್ರ ಬೆಂಡೆ, ನಾಗಪ್ಪ ಜಂಬಗಿ, ಆನಂದ ಕಳ್ಳಿಮನಿ, ಶಂಕರ ಕೌಜಲಗಿ, ರಂಜನಾ ನಡುವಿನಮನಿ, ಚಂದ್ರವ್ವ ಸೋರಗಾಂವಿ, ಸತ್ಯವ್ವ ಕಳ್ಳಿಮನಿ, ರುಕ್ಮವ್ವ ಕಳ್ಳಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT