ಮೈಸೂರು: ಬಹು ನಿರೀಕ್ಷಿತ ಮೈಸೂರು– ಬೆಂಗಳೂರು ದ್ವಿಪಥ ರೈಲು ಯೋಜನೆ ಪೂರ್ಣಗೊಂಡಿದ್ದು, ನ. 19ರಂದು ರೈಲುಗಳ ಸಂಚಾರ ಆರಂಭವಾಗಲಿದೆ. 2008ರಲ್ಲಿ ಆರಂಭವಾದ ಈ ಯೋಜನೆಯು 2011ಕ್ಕೆ ಮುಗಿಯಬೇಕಿತ್ತು. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಶಸ್ತ್ರಾಗಾರ ಅಡ್ಡಿಯಾಗಿದ್ದ ಕಾರಣ, 1.7 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ದ್ವಿಪಥ ರೈಲು ಮಾರ್ಗ ಕಾಮಗಾರಿ ಮುಗಿದಿರಲಿಲ್ಲ.