ನಗರಸಭಾ ಸದಸ್ಯರಿಗೂ ಈ ಸಮಸ್ಯೆಯನ್ನು ಹಲವು ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪ್ರತಿದಿನ ಹಾವುಗಳು ಮನೆಗಳಿಗೆ ನುಗ್ಗುತ್ತಿವೆ. ಮಕ್ಕಳು ರಸ್ತೆಯಲ್ಲಿ ಓಡಾಡಲು ಭಯಭೀತರಾಗಿದ್ದಾರೆ. ಕೂಡಲೇ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಸ್ಥಳೀಯ ನಿವಾಸಿಗಳಾದ ಮಮ್ತಾಜ್ ಉನ್ನೀಸಾ, ಆರ್ಶಿಯಾ ತಾಜ್, ರಕೀಬಾ, ಪ್ರವೀಣ್, ತಬಸಮ್, ನಿಜಾಂ, ಸುಲ್ತಾನ್ ಬಾನು, ನಗೀನಾ ಮನವಿ ಮಾಡಿದ್ದಾರೆ.