ಅರಣ್ಯ ಹಕ್ಕು ಸಮಿತಿಯಲ್ಲಿ ಅರ್ಜಿ ಸಲ್ಲಿಸಿದ್ದ ಪರಿಶಿಷ್ಟ ಜಾತಿ, ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯ ವಾಸಿ ಬಡ ರೈತರಿಗೆ ಹಕ್ಕುಪತ್ರ, ಖಾತೆ ಹಾಗೂ ಪಹಣಿ ವಿತರಿಸಬೇಕು. ಬಗರ್ ಹುಕುಂ, ಅರಣ್ಯ ಭೂಮಿ ಸಾಗುವಳಿದಾರರ ಮೇಲೆ ಹೂಡಿರುವ ಎಲ್ಲ ಮೊಕದ್ದಮೆಗಳನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ್, ಉಮಾಪತಿಯಪ್ಪ, ವೀರೇಶ್, ಶಿವಪ್ಪ, ರಂಗಪ್ಪ, ಹಾಲೇಶಪ್ಪ , ಜಯಪ್ಪ, ವಿಜಯಕುಮಾರ್ ಇದ್ದರು.