ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರೆ ಬೆಳೆಯಿಂದ ಅಧಿಕ ಲಾಭ ಗಳಿಸಿದ ರೈತ

Last Updated 17 ನವೆಂಬರ್ 2017, 9:48 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ನಂದನ ಹೊಸೂರು ಗ್ರಾಮದ ಎಂ.ಸಿದ್ದೇಶ್ವರ ಹಾಗೂ ಶ್ರೀಧರ್ ಎಂಬ ರೈತರು ಅವರೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.ತಮ್ಮ ಎರಡು ಎಕರೆ ಹೊಲದಲ್ಲಿ ಅವರೆ ಬೆಳೆದಿದ್ದು, ಕಡಿಮೆ ಖರ್ಚಿನಿಂದ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ‘ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಶಿಲ್ಪ ಎಂಬ ಅವರೆ ತಳಿ ಬಿತ್ತನೆ ಮಾಡಿದ್ದೇವೆ. 

₹ 1,100ಕ್ಕೆ ಐದು →ಕೆ.ಜಿ.ಯಂತೆ ನಾಲ್ಕು →ಪ್ಯಾಕೆಟ್ ಅವರೆ→ಬೀಜ ಖರೀದಿಸಿ ಬಿತ್ತನೆ ಮಾಡಿದ್ದೇವೆ. ಬಿತ್ತನೆ ಮಾಡಿದ ಎರಡು ತಿಂಗಳು 10 ದಿನಕ್ಕೆ ಅವರೆ ಕಾಯಿ ಬೆಳೆ ಸಿಗಲಿದ್ದು, ಮುಂದೆ ಮೂರೂವರೆ ತಿಂಗಳಿನವರೆಗೆ ಫಸಲು ಸಿಗುತ್ತದೆ. ಈಗಾಗಲೇ ಮೂರು ತಿಂಗಳ ಬೆಳೆ ಇದ್ದು, ನಿತ್ಯ ನಾಲ್ಕು ಕ್ವಿಂಟಲ್ ಅವರೆಕಾಯಿ ಸಿಗುತ್ತಿದೆ’ ಎನ್ನುತ್ತಾರೆ ಇವರು.

ಮಿಶ್ರ ಕೃಷಿ: ‘ಹೊಲದಲ್ಲಿ ತೆಂಗಿನ ಸಸಿಗಳನ್ನು ನೆಟ್ಟಿದ್ದು, ಮೂರು ವರ್ಷದ ಗಿಡಗಳಿವೆ. ತೆಂಗಿನ ಸಸಿಗಳ ಮಧ್ಯದಲ್ಲಿ ಅವರೆ ಬಿತ್ತನೆ ಮಾಡಿದ್ದೇವೆ. ತೋಟದಲ್ಲಿ ಅವರೆ ಬೆಳೆಯುವುದರಿಂದ ತೆಂಗಿನ ಸಸಿಗಳಿಗೂ ಅನುಕೂಲ ಆಗುತ್ತದೆ.

ಹೊಲದ ತುಂಬ ಬಳ್ಳಿ ಹರಡುವುದರಿಂದ ಸದಾ ತೇವಾಂಶ ಇರುತ್ತದೆ. ಅವರೆ ಬೆಳೆಗೆ ಬಳಸುವ ಗೊಬ್ಬರ, ಕೀಟನಾಶಕಗಳು ತೆಂಗಿನ ಸಸಿಗಳ ಬೆಳವಣಿಗೆಗೂ ಸಹಕಾರಿ ಆಗುತ್ತದೆ. ಬೇಸಿಗೆಯಲ್ಲಿ ದನಕರುಗಳು ತೆಂಗಿನ ಸಸಿ ತಿನ್ನುವುದನ್ನು ತಪ್ಪಿಸಬಹುದು. ಅವರೆಬಳ್ಳಿಯಿಂದ ಎಲೆಗಳು ಒಣಗಿ ನಂತರ ಉದುವುದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ’ ಎನ್ನುತ್ತಾರೆ ಈ ರೈತರು.

‘ಸೆಪ್ಟಂಬರ್ ತಿಂಗಳಿನಲ್ಲಿ ಬಿತ್ತನೆ ಮಾಡಿದ್ದು, ಮಳೆಯಾಶ್ರಿತವಾಗಿಯೇ ಬೆಳೆದಿದ್ದೇವೆ. ಎಚ್.ಡಿ.ಪುರ, ಉಪ್ಪರಿಗೇನಹಳ್ಳಿ ಸುತ್ತಮುತ್ತ ಹೆಚ್ಚಿನ ರೈತರು ಕೂಡ ಬೆಳೆದಿದ್ದು, ಎಲ್ಲರೂ ಸೇರಿ ಅವರೆಕಾಯಿಯನ್ನು ಬೆಂಗಳೂರಿಗೆ ಕೊಂಡೊಯ್ಯುತ್ತೇವೆ. ಬೆಂಗಳೂರಿನಲ್ಲಿ ಈಗ ಪ್ರತೀ ಕ್ವಿಂಟಲ್ ಅವರೆಕಾಯಿ ₹ 3,000ದಿಂದ ₹ 3,500ಕ್ಕೆ
ಮಾರಾಟ ಆಗುತ್ತಿದೆ. ಚಿತ್ರದುರ್ಗ, ಹೊಳಲ್ಕೆರೆಯ ವ್ಯಾಪಾರಿಗಳು ಅವರೆ ಕಾಯಿ ಕೊಳ್ಳಲು ಹೊಲಕ್ಕೇ ಬರುತ್ತಿದ್ದಾರೆ’ ಎಂದು ಸಂತಸ ಹಂಚಿಕೊಳ್ಳುತ್ತಾರೆ.

‘ಎರಡು ಎಕರೆಗಳಲ್ಲಿ ಬೆಳೆಯಲು ₹ 10,000 ಖರ್ಚಾಗಿದೆ. ಬೆಳೆ ಉತ್ತಮವಾಗಿ ಬಂದಿದ್ದು, ಹೂ, ಕಾಯಿಗಳಿಂದ ತುಂಬಿದೆ. ಬೆಳೆ ಮುಗಿಯುವ ವೇಳೆಗೆ ಏನಿಲ್ಲವೆಂದರೂ ₹ 2 ಲಕ್ಷ ಆದಾಯ ನಿರೀಕ್ಷಿಸಿದ್ದೇವೆ. ₹ 150 ದಿನಗೂಲಿಯಂತೆ ನಿತ್ಯ ನಾಲ್ಕೈದು ಮಹಿಳೆಯರು ಅವರೆ ಕಾಯಿ ಕೀಳಲು ಬರುತ್ತಾರೆ. ಈಗ ರಾಗಿ, ಜೋಳದ ಕಟಾವು ಮುಗಿಯುವ ಹಂತದಲ್ಲಿದೆ. ಆದ್ದರಿಂದ ಕೂಲಿ ಕಾರ್ಮಿಕರ ಸಮಸ್ಯೆ ಇಲ್ಲ’ ಎಂದು ಸಿದ್ದೇಶ್ವರ ಹೇಳುತ್ತಾರೆ.

2 ತಿಂಗಳು 10 ದಿನದಿಂದ ಅವರೆ ಕಾಯಿ ಕಟಾವು

ಪ್ರತಿ ಕೆ.ಜಿ.ಗೆ ₹ 35ರಿಂದ ₹ 40ಕ್ಕೆ ಮಾರಾಟ

2 ಎಕರೆ ಬೆಳೆಯಿಂದ ₹ 2 ಲಕ್ಷ ಆದಾಯ ನಿರೀಕ್ಷೆ

* * 

ಹೈಬ್ರಿಡ್ ಅವರೆಯನ್ನು ವರ್ಷದ ಎಲ್ಲಾ ಕಾಲದಲ್ಲಿಯೂ ಬೆಳೆಯಬಹುದು. ಚಳಿಗಾಲಕ್ಕೆ ಕಾಯಿಕಟ್ಟುವಂತೆ ಬಿತ್ತನೆ ಮಾಡಿದರೆ ಹೆಚ್ಚು ಇಳುವರಿ ಪಡೆಯಬಹುದು. ಎಂ.ಸಿದ್ದೇಶ್ವರ, ಅವರೆ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT