ಭೋಪಾಲ್: ಎಲ್ಲಿಯವರೆಗೆ ಹಿಂದೂಗಳು ಬಹುಸಂಖ್ಯಾರಾಗಿರುತ್ತಾರೋ ಅಲ್ಲಿಯವರೆಗೆ ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯವಿಲ್ಲ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
ಬಹುಸಂಖ್ಯಾತ ಸಮುದಾಯದ ಜನಸಂಖ್ಯೆ ಕ್ಷೀಣಿಸಲು ಪ್ರಾರಂಭವಾದ ದಿನದಿಂದ ಸಾಮಾಜಿಕ ಸಾಮರಸ್ಯ ಮತ್ತು ಅಭಿವೃದ್ಧಿಗೆ ಅಪಾಯ ಎದುರಾಗಲಿದೆ ಎಂದು ಅವರು ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದಾರೆ.
ಉತ್ತರ ಪ್ರದೇಶ, ಅಸ್ಸಾಂ, ಪಶ್ವಿಮ ಬಂಗಾಳ, ಕೇರಳ ಸೇರಿದಂತೆ ದೇಶದ ಒಟ್ಟು 54 ಜಿಲ್ಲೆಯಗಳಲ್ಲಿ ಹಿಂದೂಗಳ ಜನಸಂಖ್ಯೆ ಕ್ಷೀಣಿಸಿದೆ. ಇವು ಮುಸ್ಲಿಂ ಬಹುಸಂಖ್ಯಾತರಿರುವ ರಾಜ್ಯಗಳು. ಜನಸಂಖ್ಯೆಯಲ್ಲಾಗುತ್ತಿರುವ ಈ ಬದಲಾವಣೆ ದೇಶದ ಏಕತೆ ಮತ್ತು ಐಕ್ಯತೆಗೆ ಅಪಾಯಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.